Please enable javascript.State Election,BJP Party : ಬಿಜೆಪಿ ಅಜೇಯ ಪ್ರಯೋಗ?, ಸವಾಲಿನ ಕ್ಷೇತ್ರಗಳಿಗೆ ಸೋಲಿಲ್ಲದ ಸರದಾರರು ಶಿಫ್ಟ್‌? - the bjp is ready to state election arena with a new plan. - Vijay Karnataka

BJP Party : ಬಿಜೆಪಿ ಅಜೇಯ ಪ್ರಯೋಗ?, ಸವಾಲಿನ ಕ್ಷೇತ್ರಗಳಿಗೆ ಸೋಲಿಲ್ಲದ ಸರದಾರರು ಶಿಫ್ಟ್‌?

Vijaya Karnataka Web | 11 Apr 2023, 4:27 pm
Embed
ಬೆಂಗಳೂರು: ಈ ಬಾರಿ ನಡೆಯುವ ಕರ್ನಾಟಕ ಕುರುಕ್ಷೇತ್ರಕ್ಕೆ ಹೊಸ ಅಲೆ ಸೃಷ್ಟಿಸಲು ಕಮಲ ಪಾಳೆಯ ಸಜ್ಜಾಗಿದೆ. ಒಂದಿಲ್ಲೊಂದು ಹೊಸ ಪ್ರಯೋಗಕ್ಕೆ ಕೈ ಹಾಕುವ ಬಿಜೆಪಿ ಪಡೆ, ರಾಜ್ಯ ಚುನಾವಣಾ ಅಖಾಡಕ್ಕೆ ಹೊಸ ಪ್ಲಾನ್‌ನೊಂದಿಗೆ ಧುಮುಕಲು ರೆಡಿಯಾಗಿದೆ. ಹೌದು.. ಗುಜರಾತ್‌, ಉತ್ತರ ಪ್ರದೇಶ ಪ್ರಯೋಗದಂತೆ, ಸ್ವಕ್ಷೇತ್ರದಲ್ಲಿ ಸೋಲಿಲ್ಲದೇ ಗೆದ್ದು ಬೀಗುತ್ತಿರುವ ಕೆಲ ಹಿರಿಯರನ್ನು ಹೊಸ ಕ್ಷೇತ್ರಕ್ಕೆ ಶಿಫ್ಟ್‌ ಮಾಡಲು ಬಿಜೆಪಿ ತಯಾರಿ ನಡೆಸಿದೆ.

ಹೈಕಮಾಂಡ್‌ ನಾಯಕರು ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್‌ ಮಾಡಲಿದೆ.
ಅಲ್ಲದೇ ದಕ್ಷಿಣ ಭಾರತದ ಭದ್ರಕೋಟೆಯನ್ನು ಉಳಿಸಿಕೊಳ್ಳುವುದು ಬಿಜೆಪಿಯ ಗುರಿಯಾಗಿದೆ. ಹೀಗಾಗಿ ಸ್ವಕ್ಷೇತ್ರದಲ್ಲಿ ನಿರಾಯಾಸವಾಗಿ ಗೆಲ್ಲಬಲ್ಲ ಹಿರಿಯ ಶಾಸಕರನ್ನು ಬೇರೆ ಕ್ಷೇತ್ರದ ಅಭ್ಯರ್ಥಿಯಾಗಿಸುವುದು ವರಿಷ್ಠರ ಆಲೋಚನೆ. ಜತೆಗೆ ತಮ್ಮ ಸ್ವಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವ ಜವಾಬ್ದಾರಿಯನ್ನು ನೀಡಲಾಗುತ್ತೆ.. ಈ ಮೂಲಕ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರ ಹೈಕಮಾಂಡ್‌ನದ್ದು..

ಗುಜರಾತ್‌ ಮಾಡೆಲ್‌ ರಾಜ್ಯದಲ್ಲಿ ನಡೆಯಲಲ್ಲ, ಕರ್ನಾಟಕದಲ್ಲಿ ಅಂಥ ಪರಿಸ್ಥಿತಿಯಿಲ್ಲ. ಇಲ್ಲಿ ಪ್ರಯೋಗ ಹೆಚ್ಚಾದರೆ ಅದರಿಂದ ಪಕ್ಷಕ್ಕೆ ದುಬಾರಿಯೂ ಆಗಬಹುದು. ಈ ಎಲ್ಲಅಂಶ ಗಮನದಲ್ಲಿ ಇರಿಸಿಕೊಂಡೇ ಗೆಲುವಿನ ಸೂತ್ರದ ಪ್ರಯೋಗವನ್ನು ಜಾರಿಗೊಳಿಸಲಾಗುತ್ತದೆ. ಇದಕ್ಕೆ ಸಿದ್ಧರಾಗುವಂತೆಯೂ ರಾಜ್ಯ ನಾಯಕರಿಗೆ ಹೈಕಮಾಂಡ್‌ ಸೂಚಿಸಿದೆ ಎನ್ನಲಾಗಿದೆ.

ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಸಮರ್ಥ ಅಭ್ಯರ್ಥಿಗಳ ಕೊರತೆಯಿದೆ. ಮೈಸೂರು ಪ್ರಾಂತ್ಯದಲ್ಲಿಈ ಬಾರಿ ಹೆಚ್ಚು ಸೀಟು ಗೆಲ್ಲುವ ಯೋಚನೆಯಲ್ಲಿರುವ ಪಕ್ಷಕ್ಕೆ ಇದೇ ದೊಡ್ಡ ಸಮಸ್ಯೆಯಾಗಿದೆ. ಹಾಗಾಗಿ ವಿಶೇಷವಾಗಿ ಬೆಂಗಳೂರು ನಗರದಲ್ಲಿ ಪ್ರಭಾವಿಯಾಗಿರುವ ಕೆಲ ಶಾಸಕರ ಕ್ಷೇತ್ರ ಬದಲಿಸಿ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸಲು ಮುಂದಾಗಿದೆ.

ಈ ತಂತ್ರಗಾರಿಕೆಯ ಭಾಗವಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಜೆಡಿಎಸ್‌ ಸಾರಥಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಪ್ರಬಲ ಅಭ್ಯರ್ಥಿಗಳನ್ನು ಹೂಡಲಾಗುತ್ತದೆ. ಬಹುತೇಕವಾಗಿ ನಿರಂತರ ಗೆಲುವಿನ ಓಟದಲ್ಲಿರುವ ಹಿರಿಯರು ಈ ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕಾಗಿ ಬರಲಿದೆ. ಜತೆಗೆ ಇಂಥವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿರುವ ಹೈಕಮಾಂಡ್‌, ಫಲಿತಾಂಶ ಏನೇ ಬಂದರೂ ಪಕ್ಷ ತಮ್ಮೊಂದಿಗಿರಲಿದೆ ಎಂಬ ಭರವಸೆ ನೀಡಲಿದೆ ಎಂಬ ಚರ್ಚೆಯಾಗುತ್ತಿದೆ.

ಅಲ್ಲದೇ ಕಮಲ ಪಡೆಯ 20 ಶಾಸಕರಿಗೆ ಟಿಕೆಟ್‌ ಸಿಗಲ್ಲ ಎನ್ನಲಾಗ್ತಿದೆ. ಈ ಎಲ್ಲ ಹೊಸ ಪ್ರಯೋಗಕ್ಕೆ ಮುಂದಾಗಿರುವ ಬಿಜೆಪಿಯ ಈ ತಂತ್ರ ಎಷ್ಟರ ಮಟ್ಟಿಗೆ ವರ್ಕ್‌ ಆಗುತ್ತೆ ಎನ್ನುವುದನ್ನ ಕಾದುನೋಡಬೇಕು